ಕೋಟೆಕಾರು: ರಾಜ್ಯ ಸರಕಾರದ ಜನವಿರೋಧಿ ನೀತಿಗೆ ಖಂಡನೆ: ಕೋಟೆಕಾರು ಪಟ್ಟಣ ಪಂಚಾಯತ್ ಕಚೇರಿ ಎದುರು ಬಿಜೆಪಿ ಮಹಾಶಕ್ತಿ ಕೇಂದ್ರದಿಂದ ಪ್ರತಿಭಟನೆ!

  • 23 Jun 2025 04:34:10 PM


ಕೋಟೆಕಾರು: ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಕೋಟೆಕಾರು ಬಿಜೆಪಿ ಮಹಾಶಕ್ತಿ ಕೇಂದ್ರದ ಆಶ್ರಯದಲ್ಲಿ ಪಟ್ಟಣ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಇಂದು ಜೂನ್ 23 ಭಾರೀ ಪ್ರತಿಭಟನೆ ನಡೆಯಿತು.

 

ಪ್ರತಿಭಟನೆಯಲ್ಲಿ ಬಿಜೆಪಿ ಮಂಗಳೂರು ಮಂಡಲ ಪ್ರಧಾನ ಕಾರ್ಯದರ್ಶಿ ವಕೀಲ ಶ್ರೀ ಮೋಹನ್ ರಾಜ್ ಕೆ ಆರ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.

 

ಈ ಸಂದರ್ಭದಲ್ಲಿ ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ದಿವ್ಯ ಎಸ್. ಶೆಟ್ಟಿ, ಉಪಾಧ್ಯಕ್ಷ ಶ್ರೀ ಪ್ರವೀಣ್ ಬಗಂಬಿಲ, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಶೆಟ್ಟಿ ಸುಳ್ಳೆಂಜಿರು, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಯಶವಂತ್ ಆಳ್ವ, ಒಬಿಸಿ ಮೋರ್ಚಾ ಕಾರ್ಯದರ್ಶಿಗಳು ರವಿ ಸೋವೂರ್ ಹಾಗೂ ಸಂಪತ್ ಕುಕ್ಯಾನ್, ಮಂಡಲ ಯುವಮೋರ್ಚಾ ಕಾರ್ಯದರ್ಶಿ ಗಣೇಶ್ ಭಂಡಾರಿ ನಡಾರ್, ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಪ್ರವೀಣ್ ಕೊಂಡಾಣ, ಮಂಡಲ ಕಚೇರಿ ಕಾರ್ಯದರ್ಶಿ ಶ್ರೀಮತಿ ಸುಜಾತ ಬಿ ಶೆಟ್ಟಿ, ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಅತುಲ್ ಬಗಂಬಿಲ ಮತ್ತು ಶಕ್ತಿ ಕೇಂದ್ರ ಪ್ರಮುಖರಾದ ಶಂಕರ್ ನಾರಾಯಣ ಆಚಾರ್ಯ, ಪ್ರವೀಣ್ ಶೆಟ್ಟಿ ಸಂಪಿಗೆ, ದೇವೀಶ್ ಪೂಜಾರಿ, ನಿತಿನ್ ಪೂಜಾರಿ, ಶರತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

 

ಕೌನ್ಸಿಲರ್‌ಗಳು ಸುಜಿತ್ ಮಾಡೂರು, ರಾಘವ ಗಟ್ಟಿ, ಭವಾನಿ ದೇವದಾಸ್, ಅನಿತ, ದಿರಾಜ್ ಕುಸಾಲ್ ನಗರ, ರೈತ ಮೋರ್ಚಾ ಕಾರ್ಯದರ್ಶಿ ಪದ್ಮನಾಭ ಗಟ್ಟಿ, ಕಾರ್ಯಕಾರಿಣಿ ಸದಸ್ಯ ಪದ್ಮನಾಭ ಪಾದೆ, ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಹೇಮಾ, ಹಾಗೂ ಪ್ರಮುಖ ಕಾರ್ಯಕರ್ತರು ರವೀಂದ್ರ ಶೆಟ್ಟಿ ಬಾಯಾರ್ ತೋಟ, ಪುರುಷೋತ್ತಮ ಗಟ್ಟಿ, ಪ್ರವೀಣ್ ಕುಮಾರ್ ಬಾಯಾರ್ ತೋಟ, ರಾಜೇಶ್ ಮಡ್ಯಾರ್, ಅರ್ಜುನ್ ಮಾಡೂರ್, ಪ್ರಿಯಾ ಬಂಗೇರ, ಪುಷ್ಪಲತಾ ಗಟ್ಟಿ, ಪಾರ್ವತಿ ಮುರಳಿ, ಉದಯ ರಾವ್ ಕೊಂಡಾಣ, ರಾಹುಲ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.