ಶ್ರಿ ರಂಗಪಟ್ಟಣ: ನವೆಂಬರ್ 17, 2024 ಆದಿತ್ಯವಾರ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಹಿಂದು ಜಾಗರಣ ವೇದಿಕೆಯು ಶ್ರೀ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನದ ಪುನರ್ ನಿರ್ಮಾಣದ *ಹನುಮ ಮಾಲೆ* ಯ ಪ್ರಚಾರಕ್ಕಾಗಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಪ್ರಚಾರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಬೆಳಗ್ಗೆ 10:30ಕ್ಕೆ ನಡೆಯಿತು.
ದೇವಾಲಯದ ಪುನರ್ ನಿರ್ಮಾಣದ ಸಂಕಲ್ಪಮಾಲೆ ಭಾಗವಾಗಿ,*ಹನುಮ ಮಾಲೆ ಧಾರಣೆ ಡಿಸೆಂಬರ್ 6, 2024* ರಂದು ಶುಕ್ರವಾರ ತಾಲೂಕು ಕೇಂದ್ರಗಳಲ್ಲಿ ಪ್ರಾರಂಭಗೊಳ್ಳಲಿದೆ.
ಈ ಹಿನ್ನೆಲೆಯಲ್ಲಿ, ಡಿಸೆಂಬರ್ 15, 2024ರಂದು ಬೆಳಗ್ಗೆ 10:00ಕ್ಕೆ ಗಂಜಾಂನ ಶ್ರೀ ನಿಮಿಷಾಂಭ ದೇವಸ್ಥಾನದ ಆವರಣದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ. ನಂತರ, 11:30ಕ್ಕೆ ಶ್ರೀ ನಿಮಿಷಾಂಭ ದೇವಸ್ಥಾನದಿಂದ ಶ್ರೀ ರಂಗನಾಥಸ್ವಾಮಿ ದೇವಾಲಯದವರೆಗೆ ಸಂಕೀರ್ತನಾ ಯಾತ್ರೆ ನಡೆಯಲಿದೆ.
ಈ ಕಾರ್ಯಕ್ರಮಗಳು ಭಕ್ತರ ಆಧ್ಯಾತ್ಮಿಕ ಹಬ್ಬ ಮತ್ತು ಸಮುದಾಯದ ಏಕತೆಗೊಂದು ಪ್ರತೀಕವಾಗಿ ನಡೆಯುತ್ತದೆ. ದೇವಾಲಯದ ಪುನರ್ ನಿರ್ಮಾಣದ ಮಹತ್ವವನ್ನು ಭಕ್ತರಲ್ಲಿ ಅರಿವು ಮೂಡಿಸುವುದಾಗಿ ನಿರೀಕ್ಷಿಸಲಾಗಿದೆ.