ದೇಲಂಪಾಡಿ: ಅಂಗಡಿಮೊಗರು ಸಮೀಪದ ಪುತ್ತಿಗೆ ಗ್ರಾಮದಲ್ಲಿರುವ ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ನಡೆಯುವ ಧನುಪೂಜೆ ಮಹೋತ್ಸವವು ಡಿಸೆಂಬರ್ 16ರಿಂದ ಜನವರಿ 14ರ ತನಕ ವಿಜೃಂಭಣೆಯಿಂದ ಜರಗಯಲಿದೆ. ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ಮತ್ತು 6 ಗಂಟೆಗೆ ಮಹಾಪೂಜೆ ಜರಗಲಿದೆ.
ಈ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿ ಅವರು ಬಿಡುಗಡೆಗೊಳಿಸಿ, ಕಾರ್ಯಕ್ರಮವು ಯಶಸ್ವಿಯಾಗಲೆಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಧನುಪೂಜಾ ಸಮಿತಿಯ ಪದಾಧಿಕಾರಿಗಳಾದ ಡಿ. ದಾಮೋದರನ್, ಡಿ.ಎನ್. ರಾಧಾಕೃಷ್ಣ, ಡಿ. ರಾಜೇಂದ್ರ ರೈ, ಮತ್ತು ಭಾಸ್ಕರ ಡಿ.ಕೆ. ಮೊದಲಾದವರು ಉಪಸ್ಥತರಿದ್ದರು.
ಪ್ರತಿ ವರ್ಷ ಜರಗುವ ಈ ಧನುಪೂಜಾ ಮಹೋತ್ಸವವು ನಾಡಿನ ಉತ್ಸವ ಪ್ರತೀತಿಯಲ್ಲಿ ವಿಜೃಂಭಣೆಯಿಂದ ನಡೆಯುತ್ತದೆ. ಈ ಮಹೋತ್ಸವಕ್ಕೆ ಕರ್ನಾಟಕ ಗಡಿಭಾಗಗಳಿಂದ ಭಕ್ತರು ಆಗಮಿಸುತ್ತಾರೆ.
ಪ್ರತಿ ವರ್ಷ ಧನುಪೂಜಾ ಮಹೋತ್ಸವವನ್ನು ನಾಡಿನ ಉತ್ಸವ ಪ್ರತೀತಿಯಲ್ಲಿ ಕೊಂಡಾಡುವ ಜಿಲ್ಲೆಯ ಪ್ರಧಾನ ಕ್ಷೇತ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ದೇಲಂಪಾಡಿ ಕ್ಷೇತ್ರಕ್ಕೆ ಕರ್ನಾಟಕದ ಗಡಿ ಭಾಗಗಳಿಂದ ಸಹ ಭಕ್ತಾದಿಗಳು ಬರುತ್ತಿದ್ದಾರೆ. ಇದಕ್ಕಾಗಿ ಕ್ಷೇತ್ರ ಪರಿಸರವನ್ನು ಸಜ್ಜುಗೊಲಿಸಲಾಗಿದೆ.
ವಿವಿಧ ಸಮಿತಿಗಳು ಹಾಗೂ ಊರವರು ಶ್ರಮದಾನದ ಮೂಲಕ ದೇವಸ್ಥಾನದ ಧನುಪೂಜಾ ಮಹೋತ್ಸವದ ಯಶಸ್ವಿ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಒಂದು ತಿಂಗಳ ಕಾಲ ನಡೆಯುವ ಈ ಧಾರ್ಮಿಕ ಉತ್ಸವವು ಜನವರಿ 14ರಂದು ಸಮಾರೋಪಗೊಳ್ಳಲಿದೆ.