ದೇಲಂಪಾಡಿ ಕ್ಷೇತ್ರ ಬ್ರಹ್ಮಕಲಶೋತ್ಸವಕ್ಕಾಗಿ ಸಾವಯವ ಕೃಷಿ ಯೋಜನೆಗೆ ಚಾಲನೆ!

  • 03 Feb 2025 10:13:48 PM


ಅಂಗಡಿಮೊಗರು : ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಬ್ರಹ್ಮಕಲಶೋತ್ಸವ ಮೇ.6ರಿಂದ 12ರ ತನಕ ಜರಗಲಿದೆ ಇದಕ್ಕೆ ಪೂರಕವಾಗಿ ಅಂಗಡಿಮೊಗರು ಗ್ರಾಮ ವ್ಯಾಪ್ತಿಯ ಭಕ್ತ ಜನರ ಸಹಭಾಗಿತ್ವದಲ್ಲಿ ಪುತ್ತಿಗೆ ಗ್ರಾ.ಪಂ. ಕೃಷಿ ಭವನದ ಸಹಕಾರದೊಂದಿಗೆ ಸಾವಯವ ಕೃಷಿ ಯೋಜನೆಗೆ ಸೋಮವಾರ ಚಾಲನೆ ನೀಡಲಾಯಿತು. 

 

ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುವ ವೇಳೆಯಲ್ಲಿ 'ಪರಂಪರಾಗತವಾಗಿ ನಡೆದುಕೊಂಡು ಬರುತ್ತಿದ್ದ ಸಾವಯವ ಕೃಷಿ ಕಾರ್ಯಗಳು ಇತ್ತೀಚಿಗಿನ ದಿನಗಳಲ್ಲಿ ಮೂಲೆ ಗುಂಪಾಗುತ್ತಿವೆ ಇದನ್ನು ಪುನರ್ಜೀವನಗೊಳಿಸುವುದಕ್ಕಾಗಿ ಯುವ ಜನತೆಗೆ ಪ್ರೋತ್ಸಾಹದ ಜತೆಗೆ ಗ್ರಾಮ ದೇವರ ಉತ್ಸವಕ್ಕೆ ಸಮರ್ಪಿಸುವ ಮಹತ್ತರ ಯೋಜನೆ ನಾಡಿಗೆ ಮಾದರಿಯಾಗಿ ಮೂಡಿ ಬರಲಿ ಎಂದು ಶುಭ ಹಾರೈಸಿದರು.  

 

 

ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಡಿ. ದಾಮೋದರ ಅವರು ಸಭೆಯ‌ ಅಧ್ಯಕ್ಷತೆಯನ್ನು ವಹಿಸಿದರು. ಪುತ್ತಿಗೆ ಕೃಷಿ ಭವನದ ಕೃಷಿ ಅಧಿಕಾರಿ ದಿನೇಶ್‌ ಪೆರುಂಬಳ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ ಕ್ಷೇತ್ರ ಬ್ರಹ್ಮಕಲಶೋತ್ಸವಕ್ಕೆ ಅಗತ್ಯವಾಗಿರುವ ತರಕಾರಿ ಸ್ವತಃ ಬೆಳೆಸುದರ ಮೂಲಕ ಮಹತ್ತರ ಹೆಜ್ಜೆ ಇರಿಸಿದ ಈ ಯೋಜನೆ ನಾಡಿಗೆ ಮಾದರಿಯಾಗಿವೆ ಇದಕ್ಕಾಗಿ ಕೃಷಿ ಭವನ ಹಾಗೂ ಸರಕಾರದ ಸಹಕಾರ ನೀಡಲು ಪ್ರಯತ್ನ ನಡೆಸುವುದಾಗಿ ಹೇಳಿದರು. ಗ್ರಾ.ಪಂ.ಕೃಷಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಪಾಲಕ್ಷ ರೈ, ವಾರ್ಡ್ ಸದಸ್ಯೆ ಪ್ರೇಮ ಎಸ್ ರೈ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಶಂಕರ ರೈ ಮಾಸ್ತರ್ , ಸೇವಾ ಸಮಿತಿ ಕಾರ್ಯದರ್ಶಿ ಕೇಶವ ಮಾಸ್ತರ್ ಮೊದಲಾದವರು ಮಾತನಾಡಿದರು. 

 

 

ರಾಧಾಕೃಷ್ಣ ಡಿ.ಎನ್.ಸ್ವಾಗತಿಸಿ ಪ್ರಭಾಕರ ಡಿ ವಂದಿಸಿದರು. ಅಂಗಡಿಮೊಗರು, ದೇಲಂಪಾಡಿ ನೈಮೊಗರು, ಮಂಟಪಾಡಿ, ಅಮಿನೆ, ಕೋರಿಕ್ಕಾರ್ ಮೊದಲಾದೆಡೆ ಬ್ರಹ್ಮಕಲಶೋತ್ಸವಕ್ಕಾಗಿ ವಿವಿಧ ತರದ ಸಾವಯವ ತರಕಾರಿ ಬೆಳೆಸಲು ನಿರ್ಧರಿಸಲಾಗಿದ್ದು ಇದಕ್ಕಾಗಿ ವಿವಿಧ ಸಮಿತಿ ರಚಿಸಿ ಸಂಚಾಲಕರನ್ನು ನೇಮಿಸಲಾಗಿದೆ.

 

 ಈ ಸಭೆಯಲ್ಲಿ ಅಂಗಡಿಮೊಗರು ಸೇವಾ ಸಹಕಾರಿ ಬ್ಯಾಂಕ್ ನ ಕಾರ್ಯದರ್ಶಿ ವಿಠಲ ರೈ ,ಆನಂದ ಎಂ.ಕೆ, ಶಿವಪ್ಪ ರೈ,ಊರ ಹಿರಿಯರಾದ ಬಾಲಕೃಷ್ಣ ರೈ ನೈಮುಗೇರು, ಕೊಟ್ಯಣ್ಣ ರೈ, ಮೈಂದಪ್ಪ ರೈ ಹಾಗೂ ಮಹಿಳಾ ಸಮಿತಿ, ಕುಟುಂಬಶ್ರೀ ಘಟಕ ಸದಸ್ಯೆಯರು ಭಾಗವಹಿಸಿದರು.