ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳಿಂದ ರಚಿಸಲಾದ 'ಟೀಮ್ ಅಗಸ್ತ್ಯ' ತಂಡವು ಕಳೆದ ಕೆಲವು ವರ್ಷಗಳಿಂದ ಸಿಪಿಎಲ್ ಲೀಗ್ಗಳಲ್ಲಿ ಯಶಸ್ವಿಯಾಗಿ ಭಾಗವಹಿಸುತ್ತಾ ಬಂದಿದೆ.
ಕಳೆದ ಸಾಲಿನ ಸೀಸನ್ 4ರಲ್ಲಿ ಈ ತಂಡವು ದ್ವಿತೀಯ ರನ್ನರ್ ಅಪ್ ಸ್ಥಾನ ಗಳಿಸಿತ್ತು. ಇದೇ ಹಾದಿಯಲ್ಲಿಯೇ ಮುಂದುವರಿದ ತಂಡವು, ಮೇ 5 ರಂದು ನಡೆದ ಸೀಸನ್ 5 ಟೂರ್ನಿಯಲ್ಲಿ ಕೂಡ ದ್ವಿತೀಯ ರನ್ನರ್ ಅಪ್ ಪ್ರಶಸ್ತಿ ಗೆದ್ದ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
ಈ ತಂಡದ ಉತ್ತಮ ಬ್ಯಾಟ್ಸ್ಮನ್ ಎಂದಾಗಿ ಅಭಿರಾಮ್ ಗೌಡ ಅವರು ಗುರುತಿಸಲ್ಪಟ್ಟಿದ್ದಾರೆ.
ಟೀಮ್ ಅಗಸ್ತ್ಯ ತಂಡದ ನಿರಂತರ ಪರಿಶ್ರಮ ಮತ್ತು ಕ್ರೀಡಾ ಉತ್ಸಾಹಕ್ಕೆ ಸ್ಥಳೀಯ ಕ್ರೀಡಾಸಕ್ತರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ಈ ತಂಡವು ಇನ್ನಷ್ಟು ಕ್ರೀಡಾಕೂಟಗಳಲ್ಲಿ ಉತ್ತಮ ಪ್ರದರ್ಶನ ನೀಡಲಿ.