ಬೆಂಗಳೂರು: RCB ವಿಜಯೋತ್ಸವಡಲ್ಲಿ ಕಾಲ್ತುಳಿತದಲ್ಲಿ 11 ಸಾವು: RCB ಫ್ರಾಂಚೈಸಿಯಿಂದ ಮೃತ ಕುಟುಂಬಗಳಿಗೆ ₹10 ಲಕ್ಷ ಪರಿಹಾರ!;ಗಾಯಾಳು ಅಭಿಮಾನಿಗಳ ನೆರವಿಗಾಗಿ ‘RCB ಕೇರ್ ನಿಧಿ’ ರಚನೆ!

  • 06 Jun 2025 03:03:33 PM


ಬೆಂಗಳೂರು: RCB ವಿಜಯೋತ್ಸವದ ವೇಳೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಭಾಗದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ11 ಮಂದಿ ಪ್ರಾಣ ಕಳೆದು ಕೊಂಡ ಹೃದಯ ದ್ರಾವಿಕ ಘಟನೆ ಮೊನ್ನೆ ಸಂಭವಿಸಿದೆ.

 

ಇದೀಗ ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡ 11 ಮಂದಿ ಕುಟುಂಬಗಳಿಗೆ ₹10 ಲಕ್ಷ ಪರಿಹಾರವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಘೋಷಿಸಿದೆ.

 

ಈ ದುರ್ಘಟನೆಗೆ ಸರ್ಕಾರಿ ಭದ್ರತಾ ವ್ಯವಸ್ಥೆಯ ವೈಫಲ್ಯ ಕಾರಣವೆಂಬ ಆರೋಪಗಳು ಕೇಳಿಬಂದಿದ್ದರೂ ಸರ್ಕಾರ ಈ ವಿಷಯದಲ್ಲಿ ಸ್ಪಷ್ಟನೆ ನೀಡಿಲ್ಲ. ಇದಕ್ಕೂ ಮುನ್ನ ರಾಜ್ಯ ಸರ್ಕಾರದಿಂದ ಪ್ರತಿ ಮೃತನ ಕುಟುಂಬಕ್ಕೆ ₹10 ಲಕ್ಷ ಪರಿಹಾರ ಘೋಷಿಸಲಾಗಿತ್ತು. ಅಲ್ಲದೆ ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ತಿಳಿಸಿತ್ತು.

 

ಈಗ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು (KSCA) ಕೂಡ ₹5 ಲಕ್ಷ ಪರಿಹಾರ ಘೋಷಿಸಿದೆ.

 

ಇದಾದ ಬಳಿಕ RCB ಫ್ರಾಂಚೈಸಿ ಕೂಡ ಸಾವನ್ನಪ್ಪಿದವರ ಕುಟುಂಬಗಳಿಗೆ ಆರ್ಥಿಕ ಸಹಾಯದ ಜೊತೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು RCB ಅಭಿಮಾನಿಗಳ ಸಹಾಯಕ್ಕಾಗಿ ‘RCB ಕೇರ್ ನಿಧಿ’ ರಚನೆ ಮಾಡಿದೆ.