ಮಂಗಳೂರು: ಕೆಎಸ್ಆರ್ಟಿಸಿ ಮಂಗಳೂರು ವಿಭಾಗವು ಮಂಗಳೂರು–ಧರ್ಮಸ್ಥಳ ಮಾರ್ಗದಲ್ಲಿ 'ರಾಜಹಂಸ' ಬಸ್ ಸೇವೆ ಆರಂಭಿಸುವುದಾಗಿ ಅಧಿಕೃತವಾಗಿ ಘೋಷಿಸಿದೆ.
ಈ ಹೊಸ ಸೇವೆಯನ್ನು ಏರನಾಡಯೆ ಘಟಕದಿಂದ ಜುಲೈ 3 ಬುಧವಾರದಿಂದ ಆರಂಭಿಸಲಾಗುವುದು ಇಂದು ತಿಳಿಸಿದ್ದಾರೆ.
ಬಸ್ ಸಮಯಗಳು ಹೀಗಿವೆ:
ಮಂಗಳೂರಿನಿಂದ ಧರ್ಮಸ್ಥಳಕ್ಕೆ:
ಬೆಳಿಗ್ಗೆ: 6:30, 7:00, 8:30, 9:00, 11:15
ಮಧ್ಯಾಹ್ನ: 12:15, 2:30, 3:30
ಸಂಜೆ: 5:30, 6:30
ಧರ್ಮಸ್ಥಳದಿಂದ ಮಂಗಳೂರಿಗೆ:
ಬೆಳಿಗ್ಗೆ: 6:30, 7:00, 9:00, 9:15, 11:30
ಮಧ್ಯಾಹ್ನ: 12:00, 2:45, 3:30, 4:30, 5:30
ರಾಜಹಂಸ aಬಸ್ಗಳು ಬಿ.ಸಿ.ರೋಡ್, ಬಂಟ್ವಾಳ, ಕರಿಂಜೆಸ್ ಕ್ರಾಸ್, ಪುಂಜಾಲಕಟ್ಟೆ, ಮಡಂತ್ಯಾರ್, ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ ಮಾರ್ಗವಾಗಿ ಸಂಚರಿಸಲಿವೆ. ಹಾಗೆಯೇ ಪ್ರತಿ ಪ್ರಯಾಣ ದರ ₹110 ಆಗಿವೆ.
ಈ ಬಸ್ ಸೇವೆಯಿಂದ ಧರ್ಮಸ್ಥಳಕ್ಕೆ ಹೋಗುವ ಪ್ರಯಾಣಿಕರಿಗೆ ಹೆಚ್ಚುವರಿ ಸೌಲಭ್ಯ ದೊರೆಯಲಿದೆ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.