ಮಂಗಳೂರು: ಮಂಗಳೂರು–ಧರ್ಮಸ್ಥಳ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್ ಸೇವೆ ಜುಲೈ 3 ಇಂದಿನಿಂದ ಆರಂಭ!

  • 03 Jul 2025 03:44:12 PM


ಮಂಗಳೂರು: ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗವು ಮಂಗಳೂರು–ಧರ್ಮಸ್ಥಳ ಮಾರ್ಗದಲ್ಲಿ 'ರಾಜಹಂಸ' ಬಸ್ ಸೇವೆ ಆರಂಭಿಸುವುದಾಗಿ ಅಧಿಕೃತವಾಗಿ ಘೋಷಿಸಿದೆ. 

 

ಈ ಹೊಸ ಸೇವೆಯನ್ನು ಏರನಾಡಯೆ ಘಟಕದಿಂದ ಜುಲೈ 3 ಬುಧವಾರದಿಂದ ಆರಂಭಿಸಲಾಗುವುದು ಇಂದು ತಿಳಿಸಿದ್ದಾರೆ.

 

ಬಸ್ ಸಮಯಗಳು ಹೀಗಿವೆ: 

 

ಮಂಗಳೂರಿನಿಂದ ಧರ್ಮಸ್ಥಳಕ್ಕೆ:

 

ಬೆಳಿಗ್ಗೆ: 6:30, 7:00, 8:30, 9:00, 11:15

 

ಮಧ್ಯಾಹ್ನ: 12:15, 2:30, 3:30

 

ಸಂಜೆ: 5:30, 6:30

 

 

ಧರ್ಮಸ್ಥಳದಿಂದ ಮಂಗಳೂರಿಗೆ:

 

ಬೆಳಿಗ್ಗೆ: 6:30, 7:00, 9:00, 9:15, 11:30

 

ಮಧ್ಯಾಹ್ನ: 12:00, 2:45, 3:30, 4:30, 5:30 

 

 

ರಾಜಹಂಸ aಬಸ್‌ಗಳು ಬಿ.ಸಿ.ರೋಡ್, ಬಂಟ್ವಾಳ, ಕರಿಂಜೆಸ್ ಕ್ರಾಸ್, ಪುಂಜಾಲಕಟ್ಟೆ, ಮಡಂತ್ಯಾರ್, ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ ಮಾರ್ಗವಾಗಿ ಸಂಚರಿಸಲಿವೆ. ಹಾಗೆಯೇ ಪ್ರತಿ ಪ್ರಯಾಣ ದರ ₹110 ಆಗಿವೆ.

 

ಈ ಬಸ್ ಸೇವೆಯಿಂದ ಧರ್ಮಸ್ಥಳಕ್ಕೆ ಹೋಗುವ ಪ್ರಯಾಣಿಕರಿಗೆ ಹೆಚ್ಚುವರಿ ಸೌಲಭ್ಯ ದೊರೆಯಲಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.